For faster navigation, this Iframe is preloading the Wikiwand page for ಪಾಂಡವರು.

ಪಾಂಡವರು

ದ್ರೌಪದಿ ಮತ್ತು ಪಾಂಡವರು

ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು. ಪಾಂಡವರು ತಮ್ಮ ಸೋದರಸಂಬಂಧಿಗಳಾದ ಕೌರವರ ವಿರುದ್ಧ (ದುರ್ಯೋಧನ ಮತ್ತು ಆತನ ಸಹೋದರರು) ಯುದ್ಧ ಮಾಡಿದರು. ಇದನ್ನು ಕುರುಕ್ಷೇತ್ರ ಯುದ್ಧ ಎಂದು ಕರೆಯಲಾಯಿತು. ಯುದ್ಧದಲ್ಲಿ ಪಾಂಡವರು ಗೆದ್ದರು ಮತ್ತು ಕೌರವರು ಸೋತರು.

ಪಾಂಡವರನ್ನು ಕುರು ರಾಜ ಪಾಂಡು ಮತ್ತು ಕುಂತಿಯವರ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನಿಂದ ಸ್ವಾಭಾವಿಕವಾಗಿ ಮಕ್ಕಳನ್ನು ಗರ್ಭಧರಿಸಲು ಅಸಮರ್ಥತೆಯಿಂದಾಗಿ ಬೇರೆ ಬೇರೆ ದೇವತೆಗಳಿಂದ ಜನಿಸಿದರು. ಪಾಂಡುವಿಗೆ ಋಷಿಯು ನೀಡಿದ ಶಾಪದಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದ್ದರಿಂದ ಪಾಂಡವರು ಕುಂತಿಗೆ ನೀಡಿದ ಮಂತ್ರವನ್ನು ವರದಾನವಾಗಿ ಬಳಸಿ ಜನಿಸಿದರು. ಯುಧಿಷ್ಠಿರನು ಧರ್ಮ ಮತ್ತು ಸಾವಿನ ದೇವರು ಯಮ, ಗಾಳಿ ಮತ್ತು ಶಕ್ತಿಯ ದೇವರು ವಾಯುವಿನಿಂದ ಭೀಮ, ಬೆಳಕಿನ ದೇವರು ಮತ್ತು ದೇವತೆಗಳ ರಾಜನಾದ ಇಂದ್ರನಿಂದ ಅರ್ಜುನ, ಮತ್ತು ನಕುಲ ಮತ್ತು ಸಹದೇವರು ಅಶ್ವಿನೀ ದೇವತೆಗಳಿಂದ ಜನಿಸಿದರು. ಹೆಚ್ಚುವರಿಯಾಗಿ, ಕುಂತಿ ಕರ್ಣನನ್ನು ತನ್ನ ಮೊದಲ ಮಗುವಾಗಿ ಜನ್ಮ ನೀಡಿದಳು, ಅವನಿಗೆ ಸೂರ್ಯದೇವನು ತಂದೆಯಾದನು. ಕುಂತಿಯು ವರನ ಸಿಂಧುತ್ವವನ್ನು ಪರೀಕ್ಷಿಸುವಾಗ ಮದುವೆಗೆ ಮುಂಚೆ ಕರ್ಣನನ್ನು ಗರ್ಭಧರಿಸಿದಳು ಮತ್ತು ವಿವಾಹದ ಮೊದಲೇ ಹುಟ್ಟಿದ ಕಾರಣ ಕರ್ಣನನ್ನು ಕೈಬಿಟ್ಟಳು. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮತ್ತಷ್ಟು ಸಂಘರ್ಷವನ್ನು ಸೃಷ್ಟಿಸಿತು, ಏಕೆಂದರೆ ಕರ್ಣನು ನಂತರ ಪಾಂಡವರ ವಿರುದ್ಧ ಕೌರವರ ಸೈನ್ಯವನ್ನು ಮುನ್ನಡೆಸಿದನು.

ಧೃತರಾಷ್ಟ್ರನ ಆಜ್ಞೆಯಿಂದಾಗಿ, ಪಾಂಡವರನ್ನು ಗಡಿಪಾರು ಮಾಡಲಾಯಿತು. ಅವರನ್ನು ಬರಡು ಭೂಮಿಗೆ ಓಡಿಸಲಾಯಿತು, ಆದರೆ ಅವರು ಅದನ್ನು ಭವ್ಯವಾದ ಇಂದ್ರಪ್ರಸ್ಥ ನಗರವಾಗಿ ಪರಿವರ್ತಿಸಿದರು. ಹಗೆತನದ ದುರ್ಯೋಧನನು ಯುಧಿಷ್ಠಿರನನ್ನು ದಾಳ ಆಟದಲ್ಲಿ ಜೂಜು ಆಡಲು ಆಹ್ವಾನಿಸಿದನು. ಇದು ಮಹಾಕಾವ್ಯದ ಮಹತ್ವದ ತಿರುವುಗಳಲ್ಲಿ ಒಂದಾಗಿದೆ. ಯುಧಿಷ್ಠಿರನು ತನ್ನ ಜೂಜಿನ ಚಟದಿಂದಾಗಿ ತನ್ನ ಸಂಪತ್ತು, ಸಾಮ್ರಾಜ್ಯ ಮತ್ತು ಆಸ್ತಿಗಳನ್ನು ಕಳೆದುಕೊಂಡನು, ಇದು ಶಕುನಿಯು ದಾಳದ ಆಟದಲ್ಲಿ ಮೋಸ ಮಾಡಿದ್ದು ಕಾರಣವಾಯಿತು. ಆದ್ದರಿಂದ, ಪಾಂಡವರನ್ನು ಹದಿಮೂರು ವರ್ಷಗಳ ಕಾಲ ವನವಾಸಕ್ಕೆ ಕಳುಹಿಸಲಾಯಿತು. ಹನ್ನೆರಡು ವರ್ಷಗಳ ವನವಾಸವನ್ನು ಕಳೆದ ನಂತರ, ಅವರು ಮತ್ಸ್ಯ ಸಾಮ್ರಾಜ್ಯದಲ್ಲಿ ಅಜ್ಞಾತ ವಾಸದಲ್ಲಿ ವಾಸಿಸುತ್ತಿದ್ದರು. ಅನಂತರ ಪಾಂಡವರು ಸೈನ್ಯವನ್ನು ಸಂಗ್ರಹಿಸಿ ಮತ್ತು ಕೌರವರನ್ನು ಎದುರಿಸಲು ಮತ್ತು ಅಂತಿಮವಾಗಿ ಸೋಲಿಸಲು ಕೃಷ್ಣನ ಮಾರ್ಗದರ್ಶನವನ್ನು ಪಡೆದರು. ಪಾಂಡವರು ಹಸ್ತಿನಾಪುರ ಮತ್ತು ಕುರು ಸಾಮ್ರಾಜ್ಯದ ರಾಜನ ಸ್ಥಾನಮಾನವನ್ನು ಮರಳಿ ಪಡೆದರು. ಆದಾಗ್ಯೂ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅವರು ಮಾಡಿದ ತ್ಯಾಗದಿಂದಾಗಿ, ಮತ್ತು ತಮ್ಮ ಅಂತಿಮ ತಪಸ್ಸನ್ನು ಬಳಿಸಿಕೊಳ್ಳುವ ಮೂಲಕ ಮತ್ತು ಅಂತಿಮವಾಗಿ ಹಿಮಾಲಯಕ್ಕೆ ನಡೆದರು.

ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.

ಕುಂತಿಯ ಮಕ್ಕಳು:-
ಮಾದ್ರಿಯ ಮಕ್ಕಳು:-
(ಅವಳಿಗಳು)

ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ. ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.

ಬಾಲ್ಯ

[ಬದಲಾಯಿಸಿ]

ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು.

ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು.

ವನವಾಸ

[ಬದಲಾಯಿಸಿ]

ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾ ಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು.

ಮಹಾ ಭಾರತ ಕದನ

[ಬದಲಾಯಿಸಿ]

ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ.

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
{{bottomLinkPreText}} {{bottomLinkText}}
ಪಾಂಡವರು
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?